“ಸಹಕಾರದಿಂದ ಸುಖ ಸಮೃದ್ಧಿ” ಈ ಶುದ್ಧ ತತ್ವದ ಭದ್ರ ಬುನಾದಿಯ ಮೇಲೆ ಸುಭದ್ರವಾಗಿ ಬೆಳೆದು ನಿಂತ ನಮ್ಮ ನಿಮ್ಮೆಲ್ಲರ ಬ್ಯಾಂಕು. “ಕೊಟ್ಟದ್ದು ತನಗೆ” ಎಂಬ ಶರಣರ ಧ್ವನಿಗೆ ಓಗೊಟ್ಟು, ಪರಹಿತ, ಪರೊಪಕಾರಗಳ ದೀಕ್ಷೆ ತೊಟ್ಟು ಸ್ನೇಹ-ಸಹಕಾರಗಳ ಹಸ್ತ ನೀಡುತ್ತ ಅನ್ಯರ ಅಭಿವೃದ್ಧಿಯಲ್ಲಿ ತನ್ನ ಅಭಿವೃದ್ಧಿ ಕಾಣುತ್ತ ಉತ್ಸಾಹಿ ಉದ್ದಿಮೆಶೀಲರನ್ನೂ ಕ್ರಿಯಾಶೀಲರನ್ನೂ ಗಳಿಸಿ, ಉಳಿಸಿ, ಬೆಳೆಸಿರುವಂತಹ ಬ್ಯಾಂಕು.ಕ್ರಿ. ಶ. 1904 ರ ಮುಂಬಯಿ ಸರಕಾರದ ಕಾಲದಲ್ಲಿ ಪ್ರಾರಂಭವಾದ ಸಹಕಾರಿ ಆಂದೋಲನ ಜಮಖಂಡಿ ಸ್ವತಂತ್ರ ಸಂಸ್ಥಾನದಲ್ಲಿಯ ಸಹಕಾರಿ ಆಂದೋಲನದ ಮೇಲೆ ತನ್ನ ಪ್ರಭಾವ ಬೀರಿದೆ ಎಂಬುದೇ ನಮ್ಮ ಬ್ಯಾಂಕಿನ ಚಿಕ್ಕ ಐತಿಹಾಸಿಕ ಚಾರಿತ್ರ್ಯ.
ಕ್ರಿ. ಶ. 1940 ರಲ್ಲಿ ಅಂದಿನ ಜಮಖಂಡಿಯ ಘನ ಸಂಸ್ಥಾನಿಕರಾದ ಶ್ರೀಮಂತ ಶಂಕರರಾವ ಅಪ್ಪಾಸಾಹೇಬ ಪಟವರ್ಧನ ಇವರ ಉದಾರ ಆಶ್ರಯದಿಂದಲೂ ಸಾಂಗ್ಲಿಯ ಶ್ರೀ ವೇಳಣಕರ ಮತ್ತು ಮುಂಬಯಿಯ ಲಾಹೋಟಿ ಇವರ ಧನಸಹಾಯದಿಂದಲೂ ಸಂಸ್ಥಾಪಿಸಲ್ಪಟ್ಟ ನಮ್ಮ ಈ ಬ್ಯಾಂಕು ಶೈಶವಾವಸ್ಥೆಯಲ್ಲಿ ಕೇವಲ 128 ಸದಸ್ಯರ, ರೂ.22,025/- ಶೇರು ಬಂಡವಾಳದೊಂದಿಗೆ ಹುಟ್ಟಿ ಬೆಳೆದು ನಿಂತಿದೆ. ಪ್ರಾರಂಭದಲ್ಲಿ ಬ್ಯಾಂಕಿನ ದುಡಿಯುವ ಬಂಡವಾಳವು ರೂ.59,300/- ಗಳಿದ್ದು. ಠೇವಣಿ ಹಣವು 35,700/- ರೂ. ಗಳಷ್ಟಿತ್ತು, ಮತ್ತು 34,100/- ರೂ. ಗಳಷ್ಟು ಸಾಲವನ್ನು ಹಂಚಲಾಗಿತ್ತು.
ನಮ್ಮ ಬ್ಯಾಂಕು (1) ಉಳಿತಾಯ ಖಾತೆ (2) ಚಾಲ್ತಿ ಖಾತೆ (3) ಆವರ್ತಕ ಖಾತೆ (4) ಧನಲಕ್ಷ್ಮಿ ಉಳಿತಾಯ ಖಾತೆ (5) ಮುದ್ದತ ಠೇವು ಖಾತೆ (6) ಪಿಗ್ಮಿ ಖಾತೆ ಇಂತಹ ಹಲವು ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿರೀತಿಯಿಂದ ಕಾರ್ಯನಿರ್ವಹಿಸುತ್ತಿದೆ.
ಹೃದಯದಿಂದ ಕೈಗೆ ಬಂದ ಸಹಕಾರ ಹೃದಯತಟ್ಟಿ ಕೈಗೆ ಸೇರುವುದು ಎಂಬ ಉದ್ದೇಶದಿಂದಲೇ ಅನೇಕ ಜನೋಪಯೋಗಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಲ್ಲಿ ನಮ್ಮ ಬ್ಯಾಂಕ ಹಿಂದೆ ಬಿದ್ದಿಲ್ಲ.
ಸಹಕಾರ ಸಂಘ ಶಕ್ತಿಯಲ್ಲಿ ಇದೆ. ಸಂಘದ ಸದುದ್ದೇಶಗಳು ಸಿಧ್ಧಿಯಾಗಬೇಕಾದರೆ ಸಂಸ್ಥಿತ ಸದಸ್ಯರಲ್ಲಿ ಸದ್ಬುಧ್ಧಿ ಸದಾಚಾರಗಳ ಅವಶ್ಯಕತೆ ಇದೆ ಎಂದು ಮಾಜಿ ರಾಷ್ಟ್ರಪತಿಗಳಾದ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ “Not gold but men can make nation great and strong” ಎಂದಿರುವರು. ಅಂತಹ ಸಚ್ಚಾರಿತ್ರ್ಯ ಹಾಗೂ ಸದ್ವಿಚಾರಿಗಳ ಅವಿಶ್ರಾಂತ ಪರಿಶ್ರಮದ ಫಲವೇ ಈ ನಮ್ಮ ಬ್ಯಾಂಕು.